News & Events

14 Dec 2023
ಸಂಪೂರ್ಣ ಶಿಲಾಮಯವಾಗಿ ಸುಂದರವಾಯಿತು ಆನೆಕೆರೆ ಬಸದಿ

ಪಶ್ಚಿಮ ಘಟ್ಟದ ತಪ್ಪಲಿನ ಕರಿಯ ಕಲ್ಲಿನ ಮೇಲೆ ನಿಂತ ಕಾರ್ಕಳದ ಊರಲ್ಲಿ ಕೆರೆಯ ಮಧ್ಯೆ ಕಳೆದ 500 ವರ್ಷಗಳಿಂದ ಆರಾಧನೆಯಾಗುತ್ತಾ ಬರುತ್ತಿದೆ ಆನೆಕೆರೆ ಬಸದಿ. ಈ ಬಸದಿಯನ್ನು ಸಂಪೂರ್ಣ ಶಿಲಾಮಯವಾಗಿಸುವತ್ತ ಕಾರ್ಯಗಳು ಭರದಿಂದ ನಡೆಯುತ್ತಿದ್ದು ಜನವರಿ ತಿಂಗಳ 18 ನೇ ತಾರೀಕಿನಿಂದ 22ರವರೆಗೆ ಇಲ್ಲಿ ಪಂಚ ಕಲ್ಯಾಣದಂತಹ ಪುಣ್ಯ ಕಾರ್ಯ ಗಳು ನಡೆಯಲಿದೆ.

Read More
1 Dec 2023
ಆನೆಕೆರೆ ಕೆರೆಬಸದಿ ಪಂಚಕಲ್ಯಾಣ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ.

ದಿನಾಂಕ 18-01-2024 ರಿಂದ 22-01-2024 ರ ವರೆಗೆ ನಡೆಯಲಿರುವ ಪಂಚಕಲ್ಯಾಣ ಮಹೋತ್ಸವದ ಕಾರ್ಯಾಲಯವನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾತಿಸಲಾಯಿತು.

Read More
1 Dec 2023
ಮಾನ್ಯ ಶ್ರೀ ವಿ ಸುನೀಲ್ ಕುಮಾರ್, ಶಾಸಕರು ಕಾರ್ಕಳ ಇವರು ಬಸದಿಗೆ ಭೇಟಿ.

ಮಾನ್ಯ ಶ್ರೀ ವಿ ಸುನೀಲ್ ಕುಮಾರ್, ಶಾಸಕರು ಕಾರ್ಕಳ ಇವರು ಬಸದಿಗೆ ಭೇಟಿ ನೀಡಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

Read More
1 Dec 2023
ಸಮಿತಿಯ ಸದಸ್ಯರೊಂದಿಗೆ ಗೌರವ ಸಲಹೆಗಾರರಾದ ಕೆ ಅಭಯಚಂದ್ರ ಜೈನ್ ಅವರು ಮಾನ್ಯ ಮುಖ್ಯಮಂತ್ರಿ ಯವರನ್ನು ಭೇಟಿಯಾದರು.

ಕಾರ್ಕಳ ಆನೆಕೆರೆ ಕೆರೆಬಸದಿ ಪ್ರಯುಕ್ತ ಸಮಿತಿಯ ಗೌರವ ಸಲಹೆಗಾರರಾದ ಕೆ ಅಭಯಚಂದ್ರ ಜೈನ್ ರವರೊಂದಿಗೆ ಮಾನ್ಯ ಮುಖ್ಯಮಂತ್ರಿ ಯವರನ್ನು ಸಮಿತಿಯವರು ಭೇಟಿಯಾದರು

Read More
20 March 2020
ಆನೆಕೆರೆ ಬಸದಿಗೆ ಡಾ. ಡಿ. ವಿರೇಂದ್ರ ಹೆಗ್ಗಡೆ ಭೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಜೂ. 17ರಂದು ಆನೆಕೆರೆ ಬಸದಿಗೆ ಭೇಟಿ ನೀಡಿ ಬಸದಿಯ ಜೀರ್ಣೋದ್ಧಾರ ಕಾರ್ಯಗಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ, ಸಂಚಾಲಕ ನೇಮಿರಾಜ್‌ ಆರಿಗ, ಕಾರ್ಯದರ್ಶಿ ಭರತ್‌ ಜೈನ್‌, ಕೋಶಾಧಿಕಾರಿ ಶೀತಲ್‌ ಜೈನ್‌ ಶಿರ್ಲಾಲು, ಸದಸ್ಯರಾದ ರಾಜೇಶ್‌ ಜೈನ್‌ ಮತ್ತು ಚಿರಂಜೀವಿ ಜೈನ್‌ ಉಪಸ್ಥಿತರಿದ್ದರು.

Read More
20 March 2020
ಆನೆಕೆರೆ ಚತುರ್ಮುಖ ಬಸದಿ ಜೀರ್ಣೋದ್ಧಾರ, 2.72 ಕೋಟಿ ರೂ. ವೆಚ್ಚದ ಯೋಜನೆ

ಸುಮಾರು 2.72 ಕೋ.ರೂ. ವೆಚ್ಚದಲ್ಲಿ ಆನೆಕೆರೆ ಬಸದಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಬಸದಿ ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದಿಂದ 50 ಲಕ್ಷ ರೂ. ಅನುದಾನ ಒದಗಿಸಿಕೊಡುವುದಾಗಿ ಶಾಸಕ ವಿ. ಸುನಿಲ್‌ ಕುಮಾರ್‌ ಭರವಸೆ ನೀಡಿದ್ದಾರೆ. ಉಳಿದಂತೆ ಸಂಘ-ಸಂಸ್ಥೆಗಳ, ಸರ್ವರ ಸಹಕಾರ, ದೇಣಿಗೆಯೊಂದಿಗೆ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

Read More
20 March 2020
ಪ್ರವಾಸಿ ತಾಣವಾಗಿ ಅಭಿವೃದ್ಧಿ: ವಿ. ಸುನಿಲ್ ಕುಮಾರ್, ಶಾಸಕರು.

ಆನೆಕೆರೆ ಸುತ್ತ 2.60 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ ಕಾಮಗಾರಿ, ಇಂಟರ್‌ಲಾಕ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಬಸದಿ ಸುತ್ತಲಿನ ಆನೆಕೆರೆ ಅಭಿವೃದ್ಧಿಗಾಗಿ 7 ಕೋ. ರೂ. ಅನುದಾನ ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮುಂದಿನ ಡಿಸೆಂಬರ್‌ ವೇಳೆಗೆ ಕೆರೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡು ಸಂಗೀತ ಕಾರಂಜಿ ಸೇರಿದಂತೆ ಸಕಲ ವ್ಯವಸ್ಥೆ ಒದಗಿಸಲಾಗುವುದು.
-ವಿ. ಸುನಿಲ್‌ ಕುಮಾರ್‌,ಶಾಸಕರು

Read More